
11th July 2025
*ಹೊನ್ನುಡಿ*.
ಸ್ವಾನುಭವದಿಂದ ಅರಿತು
ಜೀವನ ಮೌಲ್ಯಗಳ ಕಲಿತು
ಮುಕ್ತ ಮನದಿ ಸಮಾಜದಿ ಬೆರೆತು
ಜಗದೆಲ್ಲರು ಮೆಚ್ಚುವಂತೆ ಬಾಳಿದರೆ
ಇದಕ್ಕಿಂತ ಇನ್ನೇನು ಬೇಕು
ಅರ್ಥ ಪೂರ್ಣ ಬದುಕಿಗೆ.
*ಹೊನ್ನುಡಿ*.
ಜಾತಿ ಧರ್ಮಗಳ ಪ್ರೀತಿ ಮನದೊಳಗಿರಲಿ
ದೇವರ ಪೂಜೆ ಮನೆಯೊಳಗಿರಲಿ
ನನ್ನ ದೇಶ, ನನ್ನ ಜನ ಎನ್ನುವ ಕೂಗು
ಎಲ್ಲರ ಹೃದಯದಲ್ಲಿ ಸದಾ ಮಿಡಿಯುತ್ತಿರಲಿ.
*ಹೊನ್ನುಡಿ.*
ಬಡತನವು ಸೋಮಾರಿ ಗೆ ಶಾಪ ,
ಛಲಗಾರ ನಿಂಗೆ ವರದಾನ.
ಬಡತನವು ಸಾಧನೆಗೆ ಸ್ಪೂರ್ತಿ ಛಲಗಾರನಿಗೆ.
ಸೋಮಾರಿ ಗಳಿಗೆ ಬಡತನವೊಂದು ನೆಪ.
*ಹೊನ್ನುಡಿ*.
ಜ್ಞಾನವು ನಮ್ಮೊಳಗೆ, ಅಜ್ಞಾನವೂ ನಮ್ಮೊಳಗೆ
ದೇವರು ನಮ್ಮೊಳಗೆ , ದೆವ್ವವೂ ನಮ್ಮೊಳಗೆ
ಅರಿತರೆ ನೀ ಮಾನವ , ಅರಿಯದಿರೆ ದಾನವ.
ಅರಿತು ಮಾನವನಾಗು, ಮಾನವೀಯತೆ ಸಾರು.
✍️ಡಾ. ಮಹೇಂದ್ರ ಕುರ್ಡಿ
ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯ ಪ್ರಮಾಣ ಪತ್ರ ವಿತರಣೆ
ಮಲ್ಲಯ್ಯ ಅಜ್ಜ ದೇವರ ನೂತನ ಸರಪಳಿ ಕಟ್ಟೆಯ ಸರಪಳಿ ಹರಿಯುವ ಕಲ್ಲು, ಪ್ರತಿಷ್ಠಾಪನೆ ಕಾರ್ಯಕ್ರಮ
ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ 'ನುಡಿ ತೆರಿಗೆ ನೂರೊಂದು ಕಾರ್ಯಕ್ರಮ' - ಶಿರಿಷ ಜೋಶಿಯವರ ಬಹುಮುಖ ಸಾಹಿತ್ಯಕ ಸೇವೆ ಶ್ಲಾಘನೀಯ.- ಡಾ. ಗುರುದೇವಿ ಹುಲ್ಲೆಪ್ಪನವರ ಮಠ